Hi Bangalore


Buy Now @ ₹ 15.00 Preview
ಹಾಯ್ ಬೆಂಗಳೂರ್! : ಸಂಪುಟ : ೧೯, ಸಂಚಿಕೆ : ೨೨, ಫೆಬ್ರವರಿ ೨೭, ೨೦೧೪ ಬೆಲೆ : ೧೫ ರು ಮುಖಪುಟ ಲೇಖನ ಅವನು ಗುಟುಕು ಪ್ರೇಮಿ ರಾಮ..! ಇವನು ಚುಟುಕು ಕವಿ ಸೋಮ..! ಕೋಟಿ ಗುಂಜಿದ ಗಂಜಿಗೆರೆ! ಮೈಸೂರಿನ ಮಾನವಂತ ಜನ ಬೆಚ್ಚಿಬಿದ್ದಿದ್ದಾರೆ. ಅಖಂಡ ಬ್ರಹ್ಮಚಾರಿ ಎಂಬ ಗೆಟಪ್ಪು ಧರಿಸಿದ್ದ ಮಾಜಿ ಮಂತ್ರಿ ರಾಮದಾಸ ಮಾಡಿಕೊಂಡ ಅಪಸವ್ಯಗಳನ್ನು ನೋಡಿ ಅಸಹ್ಯಪಟ್ಟುಕೊಂಡಿದ್ದಾರೆ. ಪ್ರೇಮಕುಮಾರಿಯೊಂದಿಗಿನ ಆತನ ಪ್ರೇಮ ಕಹಾನಿ ಹೊರಬೀಳುತ್ತಿ ದ್ದಂತೆ ನೇಣು ಹಾಕಿಕೊಂಡು ಗೋಣು ಚೆಲ್ಲಲು ಹೊರಟ ರಾಮದಾಸನ ಅವತ್ತಿನ ಸ್ಥಿತಿ ಕಂಡು ಸಾಂಸ್ಕೃತಿಕ ನಗರಿಯ ಸಜ್ಜನ ಮಂದಿ ಈತನೆಡೆಗೆ ಕನಿಕರದ ದೃಷ್ಟಿ ಹರಿಸಿದ್ದು ದಿಟ. ಆದರೆ ಪ್ರೇಮಕುಮಾರಿಯೊಂದಿಗಿನ ತನ್ನ ಅಕ್ರಮ ಸಂಬಂಧ ಹೊರಬರದಂತೆ ಮೈಸೂರಿನ ಇಬ್ಬರು ಟೀವಿ ಪತ್ರಕರ್ತರಿಗೆ ಈತ ಕೋಟಿಗಟ್ಟಲೆ ರುಪಾಯಿ ಮುಡಿಪು ಕಟ್ಟಿದ ಸುದ್ದಿ ಬಯಲಾ