Hi Bangalore
Hi Bangalore

Hi Bangalore

This is an e-magazine. Download App & Read offline on any device.

Preview

ನೆಟೆದ ಹುಡುಗಿ ರಮ್ಯಾ; ಹಟ ಬಿಡದ ಅಂಬಿ ಮಂಡ್ಯದ ಜನ ಅಂಬರೀಶ್‌ರನ್ನು ಗಟ್ಟಿಪಿಂಡ ಎನ್ನುವುದು ಇದೇ ಕಾರಣಕ್ಕೆ. ಸತತ ಎರಡು ತಿಂಗಳ ಕಾಲ ಆಸ್ಪತ್ರೆ ಸೇರಿ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಚೇತರಿಸಿಕೊಂಡು ಹೊರಬಂದ ಯಾರೇ ಆದರೂ ಮನೆಗೆ ಬರುತ್ತಿದ್ದಂತೆ ಒಂದಷ್ಟು ದಿವಸ ವಿಶ್ರಾಂತಿ ಬೇಕೆಂದು ಪಟ್ಟಾಗಿ ಕುಳಿತುಬಿಡುತ್ತಾರೆ. ಆದರೆ ಅಂಬರೀಶ್ ಬೆಂಗಳೂರಿಗೆ ಬಂದ ಮರುದಿನವೇ ತಮ್ಮ ತವರು ಜಿಲ್ಲೆ ಮಂಡ್ಯದ ಕಡೆ ಹೊರಟೇಬಿಟ್ಟಿದ್ದರು. ಅಲ್ಲಿ ಸುಡುವ ಬಿಸಿಲನ್ನೂ ಲೆಕ್ಕಿಸದೆ ರೋಡ್ ಶೋ ನಡೆಸಿದ್ದರು. ಎದುರಿಗೆ ಸಿಕ್ಕ ಸಹಸ್ರಾರು ಅಭಿಮಾನಿಗಳಿಗೆ ಕೈಬೀಸಿ ಕೃತಜ್ಞತೆ ಅರ್ಪಿಸಿದ್ದರು. ಜೊತೆಗೆ ಬೆಂಗಳೂರು ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಶ್ರೀನಗರದಲ್ಲಿ ರೋಡ್‌ಶೋ ನಡೆಸಿದ್ದರು. ಅಲ್ಲಿ ನಾಗಮಂಗಲದಿಂದ ವಲಸೆ ಬಂದ ವಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸುಮಾರು ನಲವತ್ತು ಸಾವಿರದಷ್ಟಿರುವ ಈ ಜನಾಂಗದ ಮತಗಳನ್ನು ಕಾಂಗ್ರೆಸ್ ಪಡಸಾಲೆಗೆ ತಂದುಕೊಡುವ ತಾಕತ್ತಿರುವುದು ಅಂಬರೀಶ್‌ಗೆ ಮಾತ್ರ. ಹಾಗಾಗಿ ಶ್ರೀನಗರಕ್ಕೆ ಬಂದ ಅಂಬರೀಶ್ ತಮ್ಮ ಪಕ್ಷದ ಅಭ್ಯರ್ಥಿಯ ಪರ ಮತಯಾಚಿಸಿ ತಾನಿನ್ನೂ ಗಟ್ಟಿಯಾಗಿದ್ದೇನೆ, ಮುಂದೆ ರಾಜ್ಯ ರಾಜಕಾರಣದಲ್ಲಿ ಉನ್ನತ ಹುದ್ದೆಗೇರುತ್ತೇನೆ ಎಂಬ ಸೂಚನೆ ಕೊಟ್ಟಿದ್ದರು. ಹಾಗಾಗಲಿ ಎಂಬುದೇ ‘ಪತ್ರಿಕೆ’ಯ ಆಶಯ.

Hai Bangalore is a mass circulation weekly Kannada language tabloid published in Bangalore.Its editor is journalist Ravi Belagere.